ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೆಲಾನಿಯಾ ಭೇಟಿ ನೀಡಿದ್ದ ದೆಹಲಿ ಸರ್ಕಾರಿ ಶಾಲೆಯ 'ಹ್ಯಾಪಿನೆಸ್‌ ಕ್ಲಾಸ್‌'ಗಳು ವಿಶ್ವದ ಗಮನ ಸೆಳೆಯುತ್ತಿರುವುದೇಕೆ?

ಅಮೆರಿಕದ ಫಸ್ಟ್‌ ಲೇಡಿ ಮೆಲಾನಿಯಾ ಟ್ರಂಪ್‌ ಅವರು ದಿಲ್ಲಿಯ ಶಾಲೆಯೊಂದರ 'ಸಂತೋಷದ ತರಗತಿ'ಗೆ ಮಂಗಳವಾರ ಭೇಟಿ ನೀಡಿದರು. ಒತ್ತಡಮುಕ್ತ ಕಲಿಕೆಯ ಉದ್ದೇಶದಿಂದ ರೂಪುಗೊಂಡಿರುವ 'ಹ್ಯಾಪಿನೆಸ್‌ ಕ್ಲಾಸ್‌'ಗಳು ದೇಶ- ವಿದೇಶದ ತಜ್ಞರ ಗಮನ ಸೆಳೆಯುತ್ತಿವೆ. ದಕ್ಷಿಣ ದಿಲ್ಲಿಯ ಮೋತಿಬಾಗ್‌ನ ಸರ್ವೋದಯ ಕೋ ಎಜುಕೇಶನ್‌ ಸೀನಿಯರ್‌ ಸೆಕೆಂಡರಿ ಸ್ಕೂಲ್‌ಗೆ ಮಂಗಳವಾರ ವಿಶೇಷ ಭೇಟಿ ನೀಡಿದ ಮೆಲಾನಿಯಾ ಟ್ರಂಪ್‌, ಅಲ್ಲಿ ನಡೆಯುವ 'ಹ್ಯಾಪಿನೆಸ್‌ ಕ್ಲಾಸ್‌'ನ್ನು ವೀಕ್ಷಿಸಿದರು. ಶಾಲೆಯ ಮಕ್ಕಳು ಅವರನ್ನು ಆರತಿಯೆತ್ತಿ ತಿಲಕವಿಟ್ಟು ಬರಮಾಡಿಕೊಂಡರು. 45 ನಿಮಿಷಗಳ ಕ್ಲಾಸ್‌ ಚಟುವಟಿಕೆಯನ್ನು ಪೂರ್ತಿಯಾಗಿ ವೀಕ್ಷಿಸಿದ ಮೆಲಾನಿಯಾ, ತರಗತಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು. ಕೆಲವು ಮಕ್ಕಳ ಪ್ರಾಜೆಕ್ಟ್ ವರ್ಕ್ ವೀಕ್ಷಿಸಿದರು. ಕೆಲವು ಮಕ್ಕಳೊಡನೆ ಮುಕ್ತವಾಗಿ ಹರಟಿದರು. ಒಂದು ಗಂಟೆಯ ಶಾಲೆ ಭೇಟಿಯ ಬಳಿಕ ಹೊರಟು ನಿಂತಾಗ ಅವರು ಹೇಳಿದ ಮಾತು: ''ಇಲ್ಲಿರುವ ಮಕ್ಕಳು ಪ್ರತಿದಿನದ ಮುಂಜಾನೆಯನ್ನು ಕತೆ ಹೇಳುವುದು, ಪ್ರಕೃತಿಯೊಡನೆ ಸಂಭಾಷಿಸುವುದರ ಮೂಲಕ ನೆಮ್ಮದಿಯಿಂದ ಆರಂಭಿಸುತ್ತಾರೆ. ಇದು ತುಂಬ ಸ್ಫೂರ್ತಿ ನೀಡುವಂಥದು. ನಮ್ಮ ದಿನವನ್ನು ಇದಕ್ಕಿಂತ ಅರ್ಥಪೂರ್ಣವಾಗಿ ಸ್ವಾಗತಿಸುವುದನ್ನು ನಾನು ಊಹಿಸಲಾರೆ.'' ತೆರಳುವ ಮುನ್ನ, ಮಕ್ಕಳಲ್ಲಿಉತ್ತಮ ಮೌಲ್ಯಗಳನ್ನು ಬೆಳೆಸುತ್ತಿರುವುದಕ್ಕಾಗಿ ಶಿಕ್...

ದೆಹಲಿ ಜನ ಅಭಿವೃದ್ಧಿಗೆ ಬೆಂಬಲಿಸಿದ್ದು ಯಾಕೆ!?

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 62 , ಬಿಜೆಪಿ 08 , ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ.  ಈ ಮೂಲಕ ಆಪ್ ಮತ್ತೆ ಅಧಿಕಾರ ಪಡೆದಿದ್ದು, ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಕಾಂಗ್ರೆಸ್ ಶೂನ್ಯ ಸ್ಥಾನ ಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸತತ ಮೂರನೇ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ದೆಹಲಿ ಗದ್ದುಗೆ ಪಡೆದಿದ್ದು ಹೇಗೆ ಎಂಬುದರ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆಯನ್ನು ಮೀರಿ ಅರವಿಂದ್ ಕೇಜ್ರಿವಾಲ್ ಜಯಗಳಿಸಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಕಾರಣ ಏನು ಎಂಬುವುದರ ವಿವರ ಇಲ್ಲಿದೆ. ಸರಳ ಹಾಗೂ ಸ್ವಚ್ಛ ಆಡಳಿತ ದೆಹಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ಧ ಆರಂಭಗೊಂಡ ಅಣ್ಣ ಹಜಾರೆ ಹೋರಾಟದಲ್ಲಿ ಹುಟ್ಟಿಕೊಂಡ ಪಕ್ಷ ಆಮ್ ಆದ್ಮಿ ಪಾರ್ಟಿ. ಆರಂಭದಲ್ಲಿಯೇ ತಮ್ಮ ವಿಭಿನ್ನ ಶೈಲಿಯ ರಾಜಕಾರಣದಲ್ಲಿ ಗಮನ ಸೆಳೆದವರು ಆಮ್ ಆದ್ಮಿಗಳು. ಸರಳ ಹಾಗೂ ಸ್ವಚ್ಛ ಆಡಳಿತದ ಭರ...